ನನ್ನ ವಾಣಿಗೆ ಸಾರವಾಗೆಂದು ಮರಮರಳಿ

ನನ್ನ ವಾಣಿಗೆ ಸಾರವಾಗೆಂದು ಮರಮರಳಿ
ನಿನ್ನ ಕರೆಯುತ್ತ ಎಷ್ಟೆಲ್ಲ ಸ್ಫೂರ್ತಿಯ ಪಡೆದೆ,
ಈಗ ಕಬ್ಬಿಗರೆಲ್ಲ ನನ್ನ ದಾರಿಗೆ ಹೊರಳಿ
ಅವರ ಕವಿತೆಗೆ ನಿನ್ನ ನೆರಳಲ್ಲಿ ಮೆರವಣಿಗೆ.
ನನ್ನಂಥ ಮೂಕನನೂ ಹಾಡಹಚ್ಚಿದ ಕಣ್ಣು
ಇನ್ನಿಂಥ ದಡ್ಡನನೂ ಹಾರಹಚ್ಚಿದ ಚೆಲುವು,
ಕಲಿತವರ ರೆಕ್ಕೆಗಳಿಗಿತ್ತು ಹೊಸ ಗರಿಗಳನು
ನೀಡುತಿದೆ ಕೃತಿಗಳಿಗೆ ಇಮ್ಮಡಿಯ ಘನತೆಯನು.
ನಿನಗಿರಲಿ ಹೆಮ್ಮೆ ನಾ ಬರೆದ ಕವಿತೆಯ ಕುರಿತು,
ನಿನ್ನಿಂದ ಪುಟಿದ ನಿನ್ನದೆ ಸೃಷ್ಟಿ ಅದಕಾಗಿ;
ಇತರ ಕೃತಿಗಳ ಶೈಲಿಯಂತು ಬಿಡು ಜ್ವಲಿಸೀತು
ನಿನ್ನ ಘನತೆಯ ಮಿಂಚು ತೊಳಗಿ ನುಡಿಗಳು ಬೆಳಗಿ.
ನೀನೆ ನನ್ನೆಲ್ಲ ಕಲೆ ಎತ್ತಿ ಮೆರೆಸುತ್ತಿರುವೆ.
ಅಜ್ಞಾನವನ್ನು ಸಹ ಜ್ಞಾನದೆತ್ತರದಲ್ಲೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 78
So oft have i invoked thee for my muse

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾವಣಾಂತರಂಗ – ೮
Next post ಮೌನ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys